Sunday 20 September 2015

ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು



ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
 - ಮಹೇಶ ಕಲಾಲ್
ಮೌಢ್ಯತೆಯ ಪೆÇರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.
ಕಸವು ರಸವಾಗಲಿ, ಧ್ಯೇಯೋz್ದÉೀಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.
ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.
ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.
ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು  ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.
ಹಸಿವೆಯಿಂದ ಸಾಯುವಂತಾದರೂ ಜಾತಿ ಬಿಡಲೊಲ್ಲೆ ಎನ್ನುವ ಮಲ್ಲಪ್ಪನನ್ನು ಜಾತಿ ಎಂಬ ಪಾಷಾಣಕ್ಕೆ ಬಲಿಯಾದವನಂತೆ ಚಿತ್ರಿಸಿದ್ದರೂ ಅವನ ಮೂಲಕ ಮಠಾಧೀಶರು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ, ಇಂದಿನ ಸಮಾಜದಲ್ಲಿ ಜಾತಿ ಪ್ರಾದಾನ್ಯತೆ ಎಷ್ಟರಮಟ್ಟಿಗೆ ತನ್ನ ಪ್ರಭಾವವನ್ನು ಬೀರಿದೆ ಎಂಬುದನ್ನು ಇಲ್ಲಿ ಚಿತ್ರಿಸಿದ್ದಾರೆ.
ವಾತ್ಸಲ್ಯ ಎಂಬ ಕಥೆಯಲ್ಲಿ  ತಾಯಿ ಬೆಕ್ಕು ತನ್ನ ಮರಿಗಳಿಗೆ ಹಾಲುಣಿಸುವುದನ್ನು, ತದೇಕಚಿತ್ತದಿಂದ ನೋಡಿದ ಶಾಂತಮ್ಮನವರ ಮಾತೃ ಹೃದಯ. ಕೆಲವು ದಿನಗಳ ಹಿಂದೆ ಅಕಾಲಮರಣವನ್ನಪ್ಪಿದ ಮಗನನ್ನು ನೆನೆಸಿಕೊಂಡು ಕೊರಗುವಂತೆ. ತಾಯಿ ವಾತ್ಸಲ್ಯದ ಚಿತ್ರಣ ಚಿತ್ರಿಸಿದ್ದು , ಬಸವರಾಜ ಶಾಸ್ತ್ರಿಗಳು ಕಥೆಯಲ್ಲಿ ಅದೇಷ್ಟು ತಲ್ಲಿನರಾಗಿ ನಿಜ ಚಿತ್ರಣ ನೀಡಿದ್ದಾರೆಂದರೆ. ಸ್ವತಹಃ ಕಣ್ಣಾರೆ ಕಂಡದ್ದನ್ನು ತಮ್ಮ ಲೇಖನಿಯ ಮೂಲಕ ರಚಿಸಿದ್ದಾರೆ ಎನ್ನುವಂತೆ ಬಾಸವಾಗುತ್ತಿದೆ. ಇದು ಕಥೆಗಾರರ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ.
ತಾಯಿಯನ್ನು ವಾತ್ಸಲ್ಯಮಯಿ ಕರುಣಾಮಯಿ ಎನ್ನುವ ಮಾತನ್ನು ನಿಜಗೊಳಿಸಲೋಸುಗವೇ ಚಿತ್ರಿಸಿದ ಕಥೆಯಲ್ಲಿ ತಾಯಿಯ ಬಾಂಧವ್ಯವು ಮನೋಜ್ಞವಾಗಿ ರೂಪಿಸಿ ಬೆಕ್ಕಿಗೆ ಹಾಲುಣಿಸುವ ಮೂಲಕ ಪುತ್ರಶೋಕವನ್ನು ಮರೆಯುವಂತೆ ಮಾಡಿದ್ದಾರೆ.
ಮಗ್ಗಲಿಗೆ ಬೇಕು ಮನೆಗೆ ಬೇಡ ಎಂಬ ಕಥೆಯಲ್ಲಿ  ಹಿಂದೆ ಹಳ್ಳಿಗಳಲ್ಲಿ ಊರಗೌಡರ ದರ್ಪ ದಬ್ಬಾಳಿಕೆ ಹೇಗೆ ನಡೆಯುತ್ತಿತ್ತು. ಬಡತನದಲ್ಲಿರುವ ಹಳ್ಳಿಗರ ಪರಿಸ್ಥಿತಿ ಹೇಗೆ ದುರ್ಬಳಕೆಯಾಗುತ್ತಿತ್ತು ಎನ್ನುವ ಸನ್ನಿವೇಶಗಳನ್ನು ಕಥೆಗಾರರು ಪಾತ್ರಗಳ ಸಂಭಾಷಣೆಯಲ್ಲಿ ವ್ಯಕ್ತವಾಗುವ ಆಕ್ರೋಶಭರಿತ ನುಡಿಗಳಿಂದ ರಚಿಸಿದ್ದಾರೆ.
ಅರೆಮಲ್ಲಿ ಅದ್ಯಾಕೆ ಆಟು ದೂರ ನಿಂತಿ. ಇಲ್ಲಿ ಬಾ. ಎಂದಾಗ ಆ ಗೌಡ್ರೆ ನಾನಾ ಎಂದು ಆಶ್ಚರ್ಯಚಕಿತಳಾದ ಮಲ್ಲಿಗೆ. ಆ ನೀನೆ ಇಲ್ಲಿ ಯಾರು ಇಲ್ಲ. ನೀ ನಿಂತ ನೆಲದ ಮೇಲೆನೆ ನಾನು ನಿಂತಿದ್ದಿನಿ ಎಲ್ಲರೂ ಒಂದೆನೇ ಬಾ ಎಂದು ಮಲ್ಲಿಯ ಕೈಹಿಡಿದು ಎಳೆದಿದ್ದನ್ನು ಗೌಡರ ಬಾಯಿಂದ ಜಾತಿ ಸೂತಕ ಮಾನವ ನಿರ್ಮಿತ ಎನ್ನುವುದನ್ನು ಚಿತ್ರಿಸಿದ್ದಾರೆ.
ಅದಲು ಬದಲು ಕಥೆಯಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಸಮರ ಸಾರಿದ್ದಾರೆ.
ಯಾವ ಸೌದೆಯಾದರೇನು ಎಂಬ ಕಥೆಯಲ್ಲಿ ಇಳಿವಯಸ್ಸಿನಲ್ಲೂ  ಕಥೆಯಲ್ಲಿ ರಸಿಕತೆಯ ತೋರಣವನ್ನ ನಿರ್ಮಿಸಿದ್ದಲ್ಲದೆ ಭಾರತೀಯ ಸಂಸ್ಕøತಿಯ ಪುನರುಜ್ಜೀವನಗೊಳಿಸಿದ್ದಾರೆ.
ತೃಪ್ತನಾದ ಮಲ್ಲಯ್ಯ ಎಂಬ ಕಥೆಯಲ್ಲಿ ಭಕ್ತ ಮತ್ತು ಭಕ್ತಿಯ ನಡುವಣ ಸಂಕೇತವೆಂಬಂತೆ ತೃಪ್ತನಾದ ಮಲ್ಲಯ್ಯ ಎಂಬುದರ ಮೂಲಕ ಭಕ್ತಿಯ ಮಾರ್ಗವನ್ನು  ತೋರಿಸಿದ್ದಾರೆ.
ಋಣಮುಕ್ತ ಕಥೆಯಲ್ಲಿ ಲಂಚದ ಆಮೀಷಕ್ಕೆ ಒಳಗಾಗದವರಿಗೆ ವರ್ಗಾವಣೆಯ ಶಿಕ್ಷೆಯಂತು ಖಂಡಿತಾ ಇದ್ದೆ ಇದೆ. ವ್ಯವಸ್ಥೆಯನ್ನ ನಿಯಂತ್ರಿಸುತ್ತಿರುವುದು ಗುಮಾಸ್ತಿ ವ್ಯವಸ್ಥೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ  ಭಿಕ್ಷೆಯ ಪರಿಯ ವರ್ಣನೆ ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ  ಸಮ್ಮಿಳಿತವಾಗಿದೆ. ಒಂದೊಂದು ರೀತಿಯಲ್ಲಿ ನಾವೇಲ್ಲರೂ ಭಿಕ್ಷುಕರೆ ಎಂಬುದನ್ನು ಸನ್ನಿವೇಶಗಳ ನಿರೂಪಣೆಯಿಂದ ಚಿತ್ರಿಸಿದ್ದಾರೆ.
ನಿಜ ಜೀವನದ ನೈಜ ಘಟನೆಗಳನ್ನ ಕಲ್ಪನೆಗಳ ಮೂಲಕ ಸೆರೆಹಿಡಿಯಬಲ್ಲ ಕಥಾ ಶೈಲಿಯಿಂದ ಲೇಖಕರು ತುಂಬಾ ಪಳಗಿದವರಂತೆ ಕಾಣುತ್ತಾರೆ. ಸಂಸ್ಕøತಿ ಮತ್ತು ಸಾಹಿತ್ಯದ ಒಳಹೊರಹನ್ನು ತಮ್ಮದೇ ಧಾಟಿಯ ಮೂಲಕ ಪ್ರಚುರಪಡಿಸುವಲ್ಲಿ ಲೇಖಕ ಬಸವರಾಜ ಶಾಸ್ತ್ರಿಗಳು ಅದಮ್ಯ ಉತ್ಸಾಹ ಚೇತನಶೀಲರಂತೆ ವರ್ತಿಸಿರುವುದು ಅವರ ಕಥೆಗಳಲ್ಲಿ ಕಂಡು ಬರುತ್ತದೆ.
ಜಗತ್ತಿನ ಇರುವಿಕೆಯನ್ನು ತೋರಿಸಲೋಸುಗ ಇರುವ ಏಕೈಕ ಮಾರ್ಗವೇ ಸಾಹಿತ್ಯ ಸೃಷ್ಠಿ ಎನ್ನಬಹುದು. ಪ್ರತಿಯೊಬ್ಬರು ಅನ್ನವನ್ನ ಸೃಷ್ಠಿಸಿಕೊಳ್ಳಬಹುದು, ಬಟ್ಟೆಯನ್ನ ನೆಯ್ದುಕೊಳ್ಳಬಹುದು ಆದರೆ ಸಾಹಿತ್ಯ ಹಾಗಲ್ಲ ಅದು ವಾಗ್ದೇವಿಯ ವರಪುತ್ರನಿಗೆ ಒಲಿದ ಕಾಯಕ ಅದನ್ನ ಬಸವರಾಜ ಶಾಸ್ತ್ರಿಗಳು ನಿರಂತರ ಸಾಹಿತ್ಯ ರಚನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಲೇಖಕರು ಕಥೆಯಲ್ಲಿ ಬರುವ ಪಾತ್ರಗಳನ್ನು ಅತಿ ಸಮೀಪದಿಂದ ನೋಡಿದ್ದಲ್ಲದೆ, ಆ ಪಾತ್ರಗಳು ಜೀವಂತ ಇವೆಯೋ ಎಂಬಂತೆ ಚಿತ್ರಿಸಿದ್ದಲ್ಲದೆ ಆ ಪಾತ್ರಗಳ ಸಂವಹನ ಕ್ರಿಯೆಯನ್ನ ಅಭಿವ್ಯಕ್ತಗೊಳಸಿದ್ದಾರೆ. ಲೇಖಕರ ದೂರದೃಷ್ಠಿ, ಪಾತ್ರಗಳ ಜೊತೆ ನಡೆಸುವ ಅವರ ಸಂಭಾಷಣೆಯ ಪರಿ ಸೂಜಿಗವೆನಿಸಿದರೂ ಕಥೆಯಲ್ಲಿ ಎಲ್ಲಿಯೂ ಯಾವೊಬ್ಬವ್ಯಕ್ತಿ ಸ್ವಾತಂತ್ರೃಕ್ಕೂ ನೋವಾಗದಂತೆ ಕಥೆಗಳಿಗೆ ಸಾಣೆಹಿಡಿದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಿರಿಯರಾದ ಬಸವರಾಜ ಶಾಸ್ತ್ರಿಗಳು ತಮ್ಮದೇ ಧಾಟಿಯಲ್ಲಿ ಈ ಇಳಿ ವಯಸ್ಸಿನಲ್ಲಿ ಹಲವು ಲೇಖನ, ಕಥೆ, ಕವನ ಸಂಕಲನಗಳನ್ನು  ಪ್ರಕಟಿಸಿ ಸಾಹಿತ್ಯ ಸೇವೆಗೆ ಕಂಕಣಬದ್ಧರಾಗಿ ನಿಂತಿರುವುದು ಸಂತೋಷಕರ ಸಂಗತಿ. ಅವರ ಚಿಂತನಾ ಲಹರಿ ಇನ್ನೂ ಗಂಗೆಯಂತೆ ಹರಿಯಲಿ ಎಂದು ಆಶಿಸುತ್ತಾ ಗುರು ಹಿರಿಯ ಪಾದಕ್ಕೆ ಶರಣೆನ್ನುವೆ.

ಕಣ್ಣೀರ ಕಡಲಲಿ ಕೃಷಿಕನ ತವರು




ಕಣ್ಣೀರ ಕಡಲಲಿ ಕೃಷಿಕನ ತವರು


ನೇಗಿಲಯೋಗಿಯ ನೋಡಲ್ಲಿ 
ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ
ಅದರಲಿ ಹಾರಿ ಪ್ರಾಣವ ಬಿಟ್ಟನು

ಹತ್ತಿ, ಕಬ್ಬು ಬೆಳೆಯಲು ಅವನು
ಲಕ್ಷ ಸಾಲವ ಮಾಡಿಹನು
ಫೈರಿಗೆ ಹಚ್ಚಿದ ಬೆಂಕಿಯಲಿ
ಬೆಂದು ಭಸ್ಮವಾಗಿಹನು

ಸಾಲವ ಕೊಟ್ಟರು ಶೂಲವ ಕೊಟ್ಟರು
ಕೃಷಿಕನ ಬಾಳಿಗೆ ಬೆಂಕಿಯನಿಟ್ಟರು
ಕಣ್ಣೀರ ಕಡಲಲಿ ಕೃಷಿಕನ ತವರು


ಭಾಗ್ಯದ ಬೆನ್ನತ್ತಿರುವ ಸರ್ಕಾರಗಳು
ರೈತನ ಜೋಳಿಗೆ ಖಾಲಿಯಿಟ್ಟು 
ಹಂಗಿನ ಅರಮನೆ ಸೃಷ್ಠಿಸುತಿಹರು

ಪರಿಹಾರ ನೆಪದಿ ಭೇಟಿಯನ್ನಿತ್ತರು
ಮೊಸಳೆ ಕಣ್ಣೀರು ಸುರಿಸುತಿಹರು
ಪುಡಿಗಾಸು ನೀಡಿ ಪೆÇೀಸು ಕೊಟ್ಟು
ಪತ್ರಿಕೆಗಳಲಿ ರಾರಾಜಿಸುತಿಹರು

ಅನ್ನವ ಬೆಳೆವ ಅನ್ನದಾತನು
ಹಸಿವು ತಾಳದೆ ಆತ್ಮಹತ್ಯೆ ಹಾದಿ ಹಿಡಿದನು ...
ಸಾಲದ ಋಣವು ಶೂಲವಾಗಿ
ಬಾಳನು ನುಂಗಿತು ಮುಂದೆ ಸಾಗಿ
  - ಮೌನಯೋಗಿ
(ನನ್ನ ಮಾನಸ ಗುರು ಕವಿ ಕುವೆಂಪುರವರ ಕ್ಷಮೆ ಕೋರುತ್ತಾ)   

Tuesday 21 April 2015

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....
* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು ಹೆಚ್ಚಿನ ಚೈತನ್ಯ ಇರುತ್ತದೆ ಎಂದು ಭಾವಿಸಿರುವವನು ನಾನು.
ನನ್ನ ಕೆಲವು ಗೆಳೆಯರು ಹೇಳುತ್ತಾರೆ ಅಲ್ಲೋ ದಿನಾಲೂ ಯಾವಗಲೂ ಪುಸ್ತಕ ಕೈಯಲ್ಲಿ ಹಿಡಿದಿರುತ್ತಿಯಲ್ಲ ಅದು ಕೊಳಕಾಗಿ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನದಿಯ ಮಧ್ಯೆಯಲ್ಲಿರುವ ಕಲ್ಲು ನೀರಿನ ಹರಿವಿನ ಸೆಳೆತಕ್ಕೆ ಶಿಲೆಯಂತಾಗುವುದಿಲ್ಲವೇ. ಅದು ಪಾಚಿಗಟ್ಟಿದ ಮಾತ್ರಕ್ಕೆ ಕೊಳಕಾಗುವುದೇ.
ಸ್ವಚ್ಛ ಮತ್ತು ಸುಂದರವಾಗಿ ನಿರ್ಮಿಸಬೇಕಿರುವುದು ವ್ಯಕ್ತಿತ್ವವೇ ಹೊರತು ಪುಸ್ತಕವಲ್ಲ. ಪುಸ್ತಕ ಕೊಳಕಾಗುತ್ತದೆ (ಹಾಳಾಗದೆ) ಅಂತ ಅದನ್ನು ಹಾಗೆ ಇಟ್ಟಲ್ಲಿ ಅದರಲ್ಲಿನ ಸಂದೇಶವನ್ನು ಅರಿತುಕೊಳ್ಳುವುದು ಹೇಗೆ. ಪುಸ್ತಕ ಮನನವಾಗಬೇಕಿದ್ದಲ್ಲಿ ಅದನ್ನು ನಾವು ಉಪಯೋಗಿಸಲೇಬೇಕು. ಉಪಯೋಗಿಸಬೇಕೆಂದರೆ ಅದು ನಮ್ಮ ಬಳಿಯಲ್ಲಿರಬೇಕಲ್ಲವೇ.
ಇಂದಿನ ಒತ್ತಡದ ಜೀವನದಲ್ಲಿ ಓದುವುದಕ್ಕಾಗಿಯೇ ಸಮಯ ನಿಗದಿ ಮಾಡಲು ಸಾಧ್ಯವೇ. ಓದುವುದು ನಮ್ಮ ಹವ್ಯಾಸವಾಗಬೇಕೇ ವಿನಹಃ ಅದು ಕರ್ತವ್ಯವಾಗಬಾರದು. ಹಾಗಾಗಿ ಪುಸ್ತಕ ನಮ್ಮ ಬಳಿ ಇರಬೇಕು ಅಂದ ಮೇಲೆ ಅದು ಕೊಳಕಾಗದೆ (ಹಾಳಾಗದೆ)ಇರಲು ಸಾಧ್ಯವೆ. ಅಷ್ಟಕ್ಕೂ ಮಹಾತ್ಮರು ಸುಮ್ಮನೆ ಹೇಳಿದ್ದಾರೆಯೇ ಮೈಮೇಲೆ ಹರಕು ಬಟ್ಟೆ ಧರಿಸಿದ್ದರು ಪರವಾಗಿಲ್ಲ ಕೈಯಲ್ಲೊಂದು ಪುಸ್ತಕ ಇರಲಿ ಅಂತ.
ಮೊದಲು ಓದಿನ ಆಸಕ್ತಿ ಬೆಳೆಸಿಕೊಳ್ಳಲು ಪುಸ್ತಕ ಹಿಡಿದು ತಿರುಗುವುದನ್ನು ಅಭ್ಯಾಸ ರೂಢಿಸಿಕೊಳ್ಳೋಣ. ತದನಂತರ ಅದು ಜ್ಞಾನದ ಕಣಜವನ್ನು ನಮಗಾಗಿ ನೀಡುತ್ತದೆ. ಆಗ ಅದು ನಮ್ಮ ಏಳ್ಗೆಗೆ ಸಾಕಷ್ಟು ವ್ಯವಸ್ಥೆಯನ್ನು ತನ್ನಿಂತಾನೆ ಕಲ್ಪಿಸುತ್ತಾ ಹೋಗುತ್ತದೆ. ಇದೇ ಅಲ್ಲವೇ ನಿಜಕ್ಕೂ ಆಶ್ಚರ್ಯ ಎನ್ನುವುದು.
ಭಾರತದ ಜನಸಂಖ್ಯೆಯಲ್ಲಿ ಅಂದಾಜು ಶೇ.1ರಷ್ಟಾದರು ಕುಬೇರರಿದ್ದಾರೆ ಆದರೆ ಅವರ ಆಸ್ತಿ, ಅವರಿಗೆ ಸಿಕ್ಕ ಗೌರವಗಳ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ಮಾಹಿತಿ ಇದೆ. ಆದರೆ ಒಂದಂತು ಸತ್ಯ ಅದೆ ಸಾಹಿತಿ, ಲೇಖಕರ ಕೃತಿಗಳೆಷ್ಟು, ಅವರಿಗೆ ಸಿಕ್ಕ ಪ್ರಶಸ್ತಿ ಗೌರವ ಸನ್ಮಾನಗಳೆಷ್ಟು ಅಂತ ಕೇಳಿದರೆ ಸುಲಭದಲ್ಲಿ ನಮಗೆ ಉತ್ತರ ಸಿಗುತ್ತದೆ. ಈಗ ನಿವೇ ಹೇಳಿ ಇದರಲ್ಲಿ ಯಾವುದು ಶಾಸ್ವತ.
ಪ್ರತಿಯೊಬ್ಬರು ತಮ್ಮ ಮಕ್ಕಳು ಶಿಕ್ಷಣ ಕಲಿಯಲು ಮೊದಲು ಪ್ರಾರಂಭಿಸಿದಾಗ ಅಥವಾ ಉನ್ನತ ಶಿಕ್ಷಣಕ್ಕೆ ಹೋಗುವಾಗ ಮಕ್ಕಳಿಗೆ ಖುಷಿಯಾಗಲಿ ಅಂಥ ಬೈಕ್, ಕಾರು ಕೊಡಿಸುವ ಸಂಪ್ರದಾಯ ಬೆಳೆಯುತ್ತಿದೆ. ಇದು ಮಕ್ಕಳ ಮೇಲಿನ ವ್ಯಾಮೋಹದಿಂದಲ್ಲ ಬದಲಿಗೆ ನಮ್ಮ ಪ್ರತಿಷ್ಠೆಗೆ ಎನ್ನುವುದು ನನ್ನ ನಂಬಿಕೆ. ಇಂದು ಎಷ್ಟು ಜನ ತಮ್ಮ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಹೋಗಲಿ ಗಣ್ಯ ಮಾನ್ಯರು, ಪ್ರೀತಿಪಾತ್ರರಿಗೆ ಗೌರವ ಕಾಣಿಕೆ ನೀಡುವಾಗ ನಾವೇನು ಮಾಡುತ್ತೇವೆ. ನೂರಾರು ರೂಪಾಯಿ ಖರ್ಚು ಮಾಡಿ ಹೂಗುಚ್ಛ ನೀಡುತ್ತೇವೆ. ಬಲಗೈಯಿಂದ ತೆಗೆದುಕೊಂಡು ಎಡಗೈಗೆ ಕೊಟ್ಟರೆ ಅದರ ಮಹತ್ವ ಮುಗಿಯಿತು. ಆದರೆ ಅದರ ಅರ್ಧ ಬೆಲೆ ನೀಡಿ ಯಾವುದಾದರೊಂದು ಪುಸ್ತಕ ಖರೀದಿಸಿ ನೀಡಿದರೆ. ಅದು ಅವರಿಗೆ ಉಪಯೋಗವಾಗದಿರಬಹುದು. ಅವರನ್ನೆ ನಂಬಿದ ಒಂದು ಗುಂಪಿರುತ್ತದಲ್ಲ ಅವರಿಗಾದರೂ ಪ್ರಯೋಜನಕ್ಕೆ ಬರಬಹುದಲ್ಲವೇ.
ನಾನು ಹೈಸ್ಕೂಲ್ ಸೇರಿದ ಪ್ರಾರಂಭದ ದಿನ ನಮ್ಮ ಹಳ್ಳಿಯಲ್ಲಿ ಆಗ ಹೈಸ್ಕೂಲ್ ಇರಲಿಲ್ಲ. ನಮ್ಮ ತಂದೆಯವರು ನನಗೆ ಕಾಣಿಕೆಯಾಗಿ ನೀಡಿದ್ದು ಏನು ಗೊತ್ತೆ ಎರಡು ಪುಸ್ತಕ ಒಂದು ಸಾಮಾನ್ಯಜ್ಞಾನ(ರಸಪ್ರಶ್ನೆಗಳದ್ದು), ಇನ್ನೊಂದು ವ್ಯಕ್ತಿತ್ವ ವಿಕಾಸದ್ದು . ಆಗ ನನಗೆ ಆಶ್ಚರ್ಯವಾಗಿ ಊರು ಬಿಟ್ಟು 40 ಕಿಲೋ ಮೀಟರ್ ದೂರ ಹೋಗುವವನಿಗೆ ಪುಸ್ತಕ ಕೊಡುತ್ತಿಯಲ್ಲ ಎಂದು ಪ್ರಶ್ನಿಸಿದೆ. ಪಠ್ಯ ಪುಸ್ತಕವೆ ಭಾರವಾಗಿರುವಾಗ ಅದಕ್ಕೆ ಇವೇರಡು ಸೇರಿಸಿದ ಎಂದು ಅಸಮಾಧಾನವ್ಯಕ್ತಪಡಿಸಿದೆ. ಆಗ ನಮ್ಮ ತಂದೆಯವರು ನನಗೆ ಹೇಳಿದ್ದು ಏನು ಗೊತ್ತೆ ! ಜೀವನದಲ್ಲಿ ನೀನು ಯಾರಿಗೂ ಭಾರವಾಗೋದು ಬೇಡ ಅಂದರೆ ಈಗ ನೀನು ಪುಸ್ತಕಗಳ ಭಾರ ಹೊರಲೇಬೇಕು ಅಂದು ಕಳುಹಿಸಿಕೊಟ್ಟಿದ್ದರು.
ಅವರು ನನಗೆ ಕೇವಲ ತಂದೆಯಾಗಿರಲಿಲ್ಲ ಸ್ನೇಹಿತ, ಗುರುವಾಗಿದ್ದರು. ಅವರ ಒಂದೊಂದು ಸಲಹೆ ಮಾರ್ಗದರ್ಶನ ಈಗ ನನಗೆ ಜೀವನದಲ್ಲಿ ಅತ್ಯುತ್ತಮ ಪಾಠಗಳಂತೆ ಕಂಡು ಬರುತ್ತಿವೆ. ಈಗ ಹೇಳಿ ಎಷ್ಟು ನಾವು ಎಷ್ಟು ಜನ ನಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ದಿನ ಬೆಳಗಿದರೆ ಸಾಕು ನಾವು ನಮ್ಮ ಕೆಲಸ ಬಿಡುವಿದ್ದಾಗ ಪ್ರತಿಷ್ಠೆಯ ಧ್ಯೂತಕವಾಗಿ ಮಕ್ಕಳನ್ನು ಕರೆದುಕೊಂಡು ಮಾರ್ಕೆಟ್‌ಗೆ ತೆರಳಿ ಏನಾದರೂ ಖರೀದಿಸುವುದು. ಅಥವಾ ಒಂದು ಸಣ್ಣ ಪ್ರವಾಸ ಇಲ್ಲವೆ ಒಂದು ಒಳ್ಳೆಯ ಹೊಟೇಲ್‌ನಲ್ಲಿ ಊಟ. ಇದರಿಂದ ನಾವು ನಮ್ಮ ಮಕ್ಕಳನ್ನು ವ್ಯವಹಾರದ ರೂವಾರಿಗಳನ್ನಾಗಿ ತಯಾರು ಮಾಡುತ್ತಿದ್ದೇವೆ. ಅಂದ ಮೇಲೆ ವೃದ್ಧಾಶ್ರಮ ಪದ್ಧತಿ ಹೆಚ್ಚಳವಾದಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ಅವರಿಗೂ ಮುಂದೆ ಹೀಗೆ ಬಿಡುವಾದಾಗ ತಮ್ಮ ಮಕ್ಕಳ ಜೊತೆ ಕಾಲ ಕಳೆಯಬೇಕಾಗುತ್ತದೆ ವಯಸ್ಸಾದ ಅಪ್ಪ, ಅಮ್ಮಂದಿರ ಕಾಳಜಿಗೆ ಸಮಯವೆಲ್ಲಿರುತ್ತದೆ ಹೇಳಿ.
ಅದಕ್ಕಾಗಿ ಏನೇನೋ ಖರೀದಿಸಿ ವ್ಯರ್ಥ ಮಾಡುವ ಬದಲು ಪುಸ್ತಕ ಖರೀದಿಸಿ ಸಾಧ್ಯವಾದರೆ ಓದಿ, ಇಲ್ಲದಿದ್ದರೆ ಬೇರೆಯವರಲ್ಲಾದರೂ ಓದುವ ಹವ್ಯಾಸ ಬೆಳೆಸಲು ಇಂದಿನಿಂದ ಪಣತೊಡಿ.
ಜ್ಞಾನ ನಾವು ಸಮಾಜಕ್ಕೆ ಕೊಡುವ ಬಹುದೊಡ್ಡ ಆಸ್ತಿ. ಅದು ಶಾಸ್ವತವಾದದ್ದು, ಪ್ರಪಂಚದಲ್ಲಿ ಶ್ರೇಷ್ಠ ವ್ಯಕ್ತಿಗಳು ಬೆಳೆದು ಬಂದಿದ್ದು ಇದೇ ಹವ್ಯಾಸದಿಂದಲೆ. ಇದರಿಂದಲೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ನಾನೀಗ ಒಂದು ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎನ್ನುವ ನಂಬಿಕೆ ನನ್ನದು ನೀವೇನಂತರಿ.
- ಮೌನಯೋಗಿ

Monday 9 February 2015

ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ..........

ಒಂದು ಸುಳ್ಳಿನ ಕಥೆ..........

ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ..........

ಬಾಲ್ಯದ ಮಾಸದ ನೆನಪುಗಳು, ಕಂಡ ಕನಸುಗಳು ಇನ್ನು ಹಸಿಯಾಗಿವೆ ಏನೋ ಎನಿಸುತ್ತಿವೆ. ತೀರಾ ಇತ್ತಿಚಿಗೆ ನಡೆದಿದೆಯೇನೋ ಎಂಬಂತೆ. ಹಸಿ ಸುಳ್ಳಿಗೆ ಹದಿನಾರು ಸಾವಿರ ದಾರಿಯಂತೆ. ನಿಜವೆ ಇರಬಹುದು. ಸುಳ್ಳು ಹೇಳುವುದು ಎಂದರೆ ಸುಲಭವಲ್ಲ ಅದೊಂದು ಕಲೆ. ವಂಶಪಾರಂಪರ್ಯವಾಗಿಯಾಗಲಿ ಅಥವಾ ಜನ್ಮದತ್ತವಾಗಿಯಾಗಲಿ ಬರುವ ಕಲೆಯಲ್ಲ ಅದೊಂದು ಅದ್ಭುತ ಕಲೆ ಎನ್ನಬಹದು. ಯಾಕೆಂದರೆ ಒಂದು ಬಾರಿ ಸುಳ್ಳು ಹೇಳಿದರೆ ಮುಗಿತು. ಅದರಿಂದ ತಪ್ಪಿಸಿಕೊಳ್ಳೋದು ಸಾಧ್ಯನಾ. ಇಲ್ಲ. ಒಂದಕ್ಕೊಂದು ಸುಳ್ಳು ಹೇಳುತ್ತಾ ಹೋಗುತ್ತಾ ಇರಬೇಕು ಅಷ್ಟೆ. ಅದೊಂದು ತರಹ ಮುತ್ತಿನ ಮಾಲೆಗೆ ಮಣಿಗಳನ್ನು ಪೊಣಿಸಿದಂತೆ ಒಂದು ವೇಳೆ ಸೀಮಿತವಾಗಿದ್ದರೆ ಮುತ್ತಿನ ಸರ ಚೆನ್ನಾಗಿರುತ್ತೆ. ಆದರೆ ಅದು ಕೂಡ ವಿಪರೀತವಾಗಿದ್ದರೆ ತನ್ನ ಕಳೆ ಮತ್ತು ಸೊಬಗನ್ನು ಕಳೆದುಕೊಳ್ಳುತ್ತದೆ. ನೀವೆ ಯೋಚಿಸಿ ಸುಳ್ಳನ್ನು ಸುಲಭವಾಗಿ ಹೇಳಲು ಸಾಧ್ಯನಾ. ಹಾಗಂತ ಸುಳ್ಳು ಹೇಳದೆ ಇರುವುದು ಸಾಧ್ಯನಾ. ನನಗಂತು ಸಾಧ್ಯವಿಲ್ಲ ಅನ್ನಿಸುತ್ತೆ. ಸತ್ಯವನ್ನು ತಲೆ ಮೇಲೆ ಹೊಡೆದಂತೆ ಹೇಳಬಹದು ಅಂತ ಹಿರಿಯರು ಹೇಳ್ತಾರೆ. ಬರಿ ಸತ್ಯ ಹೇಳುತ್ತಾ ಜೀವನದಲ್ಲಿ ಸುಳ್ಳು ಹೇಳದೆ ಇರುವುವವರು ಉಂಟಾ. ಬರಿ ಸುಳ್ಳು ಹೇಳುತ್ತಾ ಇರುವುವರು ಉಂಟಾ. ಸತ್ಯ ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖದಂತೆ ಎನ್ನುವುದು ನನ್ನ ಅನಿಸಿಕೆ. ಕೆಲವೊಮ್ಮೆ ಸುಳ್ಳು ಹೇಳಲೇಬೇಕಾದ ಸಂದರ್ಭ ಬಂದೆ ಬರುತ್ತೆ. ಅದರಲ್ಲಿ ಪತ್ರಕರ್ತರಾದವರಿಗೆ ಮೊದಲ ಬರುತ್ತೆ ಅಂತ ಕಾಣುತ್ತೆ. ಸುಳ್ಳು ಹೇಳದೇ ಇರುವ ಪತ್ರಕರ್ತ ಇರಲು ಸಾಧ್ಯನಾ .ಇಲ್ಲ ಯಾಕೆಂದರೆ. ಸುಳ್ಳು ಎಂಬುದೊಂದು ಪ್ರಚಾರದ ಹುಚ್ಚು ಇರುವವರ ಜೊತೆಗಿನ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಾಧ್ಯಮ. ಸರ್ ನಮಸ್ಕಾರ ಹೇಗಿದ್ದಿರಿ ಚೆನ್ನಾಗಿದ್ದಿರಾ ಮನೆಯಲ್ಲಿ ಹೇಗೆ ಎಲ್ಲರೂ ಚೆನ್ನಾಗಿದ್ದಾರ ಅಂತ ತೀರಾ ಆತ್ಮೀಯರಂತೆ ಒಬ್ಬರು ಬೆಳಂಬೆಳಗ್ಗೆ ಕರೆ ಮಾಡುತ್ತಾರೆ. ಹಾಗಂತ ಅವರಿಗೆ ಪತ್ರಕರ್ತನ ಕುಟುಂಬ ಜೀವನದ ಬಗ್ಗೆ ಏನೇನು ಗೊತ್ತಿರುವುದಿಲ್ಲ. ಆದರೂ ಅವರು ವಿಚಾರ ಮಾಡುತ್ತಾರೆ. ಅವರಿಗೆ ಮದುವೆಯಾಗಿದೆಯೋ ಇಲ್ಲವೋ ಎನ್ನವುದು ಕೂಡ ಕೆಲವರಿಗೆ ಗೊತ್ತಿರುವುದಿಲ್ಲ. ನಿಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರ ಸರ್. ಅಂತ ವಿಚಾರಿಸುತ್ತಾರೆ. ಮತ್ತೊಮ್ಮೆ ಕೆಲವರು ಸರ್ ನಿಮ್ಮ ಪತ್ರಿಕೆಯಲ್ಲಿ ನಮ್ಮ ಸುದ್ದಿ ತುಂಬಾ ಚೆನ್ನಾಗಿ ಬಂದಿದೆ ಅಂತಾರೆ. ಆ ಸುದ್ದಿ ಪ್ರಕಟವಾಗಿರದಿದ್ದರೂ ಕೂಡ .ಆಗ ಅವಕ್ಕಾಗುವ ಸರದಿ ಪತ್ರಕರ್ತನದಾಗಿದ್ದರೂ ಕೂಡ ಆಗ ಅವನು ಸುಳ್ಳು ಹೇಳಲೆಬೇಕಾದ ಅನಿರ್ವಾತೆ ಇರುತ್ತೆ. ಹೀಗೆ ಕೆಲವು ದಿನಗಳ ಹಿಂದೆ ಸ್ನೇಹಿತನೊಬ್ಬ ತನಗೆ ಪರಿಚಯದವನು ಭೇಟಿಯಾದಾಗ ಪರಸ್ಪರ ನಮಸ್ಕಾರ ನಡೆದ ನಂತರ ಅವನು ಸರ್ ನಿಮ್ಮ ಪತ್ರಿಕೆಯಲ್ಲಿ ನಮ್ಮ ಸುದ್ದಿ ಬರಲೆ ಇಲ್ಲ ಎಂದು ಬಿಡಬೇಕೆ. ಆಗ ಇವನು ಒಂದು ಬಾರಿಯಲ್ಲ ಸುಳ್ಳು ಹೇಳಿ ತಪ್ಪಿಸಿಕೊಂಡರಾಯಿತು ಅಂತ ಹರೆ ನಿಮ್ಮ ಸುದ್ದಿ ಅವತ್ತೆ ಬಂದಿದೆಯಲ್ಲರೀ ನೀವು ನೋಡಿಲ್ಲಂತ ಕಾಣುತ್ತೆ. ಅಂದು ಬಿಟ್ಟ. ಅಷ್ಟಕ್ಕೆ ಬಿಡದಾ ಆ ಆಸಾಮಿ ಇಲ್ಲ ಸರ್ ಇತ್ತಿಚಿಗೆ ನಿಮ್ಮ ಪತ್ರಿಕೆ ನಮ್ಮ ಮನಿಗೆ ಸರಿಯಾಗಿ ಬರುತ್ತಿಲ್ಲ. ಪೇಪರ್ ಹಾಕುವ ಹುಡುಗ ಸರಿಯಾಗಿ ಹಾಕುತ್ತಿಲ್ಲ ಅವನಿಗೆ ಯಾವುದರಲ್ಲಿ ಹೆಚ್ಚು ಲಾಭವಿದೆ ಅದನ್ನು ಹಾಕುತ್ತಾನಂತೆ ಕಾಣುತ್ತೆ ಅಂತ ಪೇಪರ್ ಹಾಕುವ ಹುಡುಗನ ಮೇಲೆ ಹರಿಹಾಯುತ್ತಾ ಸರ್ ನೋಡುತ್ತೇನೆ ತುಂಬಾ ಧನ್ಯವಾದಗಳು. ನಿಮ್ಮಂಥವರಿಂದ ನಾವು ಬೆಳೆದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದದ್ದು ಅಂತ ಜಂಬ ಕೊಚ್ಚಿಕೊಂಡ. ದೊಡ್ಡ ಮಟ್ಟಕ್ಕೆ ಅಂದರೆ ಸಂಘಟನೆಯ ಜವಾಬ್ದಾರಿ ಅಷ್ಟೆ ಕೆಲವರಿಗೆ ಸಂಘಟನೆಯಲ್ಲಿ ಪದಾಧಿಕಾರಿ ಹುದ್ದೆ ಪಡೆಯುವುದದೆಂರೆ ಒಂದು ದೊಡ್ಡ ಸಾಧನೆ ಆದರೆ ಅವರು ಮಾಡುವುದು ಏನು ಇಲ್ಲ. ಸುದ್ದಿ ಬಂದಿದೆ ಅಂತರ ಗೊತ್ತಾದ ಮೇಲೆ ಬನ್ನಿ ಸರ್ ಟೀ ಕುಡಿಯೋಣ. ಅಂತ ಬಲವಂತದಿಂದ ಚಹಾ ಕುಡಿಸಲಿಕ್ಕೆ ಕರೆದೊಯ್ದ. ಅಲ್ಲಿ ಸರ್ ಎಂದಿನ ಪತ್ರಿಕೆಯಲ್ಲಿ ಬಂದಿದೆ. ಅಂತ ಕೇಳಬೇಕೆ .ಟಿವಿ ಮಾಧ್ಯಮದವರಾದರೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವುದನ್ನು ನೋಡಿ ತಿಳಿದುಕೊಂಡಿದ್ದ ನನ್ನ ಸ್ನೇಹಿತ ಸುಳ್ಳಿನ ಬಿಲದಲ್ಲಿ ತನಗರಿವಿಲ್ಲದಂತೆ ಬಿದ್ದಿದ್ದ ಆಗ ಮತ್ತೊಂದು ಸುಳ್ಳು ಹೇಳೋದು ಈಗ ಮತ್ತೆ ಅನಿರ್ವಾವಾಯಿತು. ಯಾಕೆಂದರೆ ಅವನು ಟೀಗೆ ಆರ್ಡರ್ ಮಾಡುತ್ತಾ ಕೇಳಿದ್ದ. ಮೊನ್ನೆ ಬಂದಿತ್ತು. ಅಂತ ಹೇಳಿ ನಿಟ್ಟುಸಿರು ಬಿಟ್ಟು ನನ್ನ ಕಡೆ ನೋಡಿದ ಪೆಚ್ಚು ಮುಖದಿಂದ ಅನಿರೀಕ್ಷತ ದೃಷ್ಟಿಯಿಂದ ನನ್ನ ಮುಗುಳ್ನಗೆ ಅವನಿಗೆ ಬಾಣದಂತೆ ನಾಟಿತು ಅಂತ ಕಾಣುತ್ತೆ. ಚಹಾ ಬರುವದರಲ್ಲಿತ್ತು ಬೇಗ ಚಹಾ ತಾರಪ್ಪ ಅರ್ಜೆಂಟ್ ಪ್ರೆಸ್ ಮೀಟ್ ಇದೆ. ಹೋಗಬೇಕು ಅಂದ. ನಿಜ ಹೇಳಬೇಕು ಅಂದ್ರೆ ಅವತ್ತು ಯಾವ ಪ್ರೆಸ್ ಮೀಟು ಇರಲಿಲ್ಲ. ಸುಳ್ಳಿನ ಸರಮಾಲೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು ಅಷ್ಟೆ ಅವನ ಗಡಿಬಿಡಿ ಕಂಡು ನನ್ನಲ್ಲೇನೋ ವಿಚಿತ್ರಭಾವನೆಯಿಂದ ಮುಗುಳ್ನಗೆ ತನ್ನಿಂದ ತಾನೆ ಹೊರಸೋಸುವುದನ್ನು ಕಂಡ ಸಿಗು ಮಗನೆ ನೀನು ಯಾವಾಗದರೂ ಮಾಡುತ್ತೇನೆ ಎಂಬಂತೆ ಕಣ್ಣುಸನ್ನೆ ಮಾಡಿದ. ಟೀ ಏನೋ ಬಂತು ಕುಡಿದ ಮೇಲೆ ಬಿಲ್ಲು ಪಾವತಿಸುವಾಗ ಸರ್ ಇರಲಿ ಇದೇನು ದೊಡ್ಡದು ನಿಮ್ಮ ಸಹಾಯದ ಮುಂದೆ. ಅಂತ ಬಿಲ್ಲು ಕೊಟ್ಟು ಹೊರಬಂದ ಕೂಡಲೇ ನಮ್ಮ ಸ್ನೇಹಿತ ಬರ್ತಿವಿ ಅಂತ ಇನ್ನೇನು ಹೊರಡಲನುವಾಗುವಷ್ಟರಲ್ಲಿ ಆ ಆಸಾಮಿ ಸರ್ ಅವತ್ತಿನ ಪತ್ರಿಕೆ ಸಿಗದಿದ್ದರೆ ನಿಮ್ಮ ಕಚೇರಿಗೆ ಬರುತ್ತೇನೆ ಸ್ವಲ್ಪ ಕೊಡ್ತಿರಾ ನನಗೆ ಪೈಲ್ ಗೆ ಬೇಕು ಅನ್ನಬೇಕೆ. ಆಗ ನೊಡ್ಬೇಕಿತ್ತು ಇವನ ಮುಖ. ಹೆಂಗಾದರು ಮಾಡಿ ತಪ್ಪಿಸಿಕೊಳ್ಳಬೇಕಾಗಿತ್ತು ಸರಿ ಬಾ ಅಂತ ಹೇಳಿ ಹೊರಟೆಬಿಟ್ಟ. ಸಂಜೆ ಸರಿಯಾದ ಸಮಯಕ್ಕೆ ಆ ಆಸಾಮಿ ಕಚೇರಿಗೆ ಹಾಜರಾಗಿಬಿಟ್ಟ. ಆ ಸಮಯದಲ್ಲಿ ಇವನಿರಲಿಲ್ಲ ಸರ್ ಇಲ್ಲವಾ ಸರ್ ಅಂತ ಕೇಳಿ ಇಲ್ಲ ಅಂದಿದ್ದಕ್ಕೆ ನಂತರ ಬರುತ್ತೇನೆ ಅಂತ ಹೊರಡುವುದರಲ್ಲಿ ನನ್ನ ಸ್ನೇಹಿತ ಬಂದೆ ಬಿಡುವುದೆ. ತಪ್ಪಿಸಿಕೊಳ್ಳುವ ಹಾಗಿಲ್ಲ. ಸುಳ್ಳು ಹೇಳುವ ಹಾಗೂ ಇಲ್ಲ. ಸರ್ ಸ್ವಲ್ಪ ಅಂತ ಹಲ್ಲು ಗಿಂಜಿದ ಆ ಆಸಾಮಿ. ಹಳೆ ಪತ್ರಿಕೆಯ ಬಂಡಲ್ ಹುಡುಕಿದ. ತಡಕಾಡಿದ ಸುದ್ದಿ ಬಂದಿದ್ದರೆ ತಾನೆ ಪತ್ರಿಕೆ ತರೋದು. ಕಡೆಗೆ ಕಡೆಗೆ ನಿಜ ಹೇಳಲೇಬೇಕು ಆದರೆ ಸ್ವಾಭಿಮಾನ ಕಾಡುತ್ತಿದೆ. ಮತ್ತೊಬ್ಬ ರಿಪೋರ್ಟರ್ ಹತ್ತಿರ ಬಂದು ಏನೋನು ಗುಸು ಗುಸು ಮಾತಾಡಿದ. ಕಡೆಗೆ ಅವನ ಬಳಿ ಬಂದು ಅವತ್ತು ನಾನೆ ಸುದ್ದಿಯನ್ನು ಹಾಕಿದ್ದೇ ಆದರೆ ಅಂದು ಅದು ಪ್ರಕಟವಾಗಿಲ್ಲ ನನ್ನದು ಸ್ವಲ್ಪ ಅರ್ಜೆಂಟೆ ಇತ್ತು. ಹೋಗಿದ್ದೆ ಯಾವುದೋ ಪ್ರಮುಖ ಸುದ್ದಿ ಬಂದಿದೆ ಅಂತ ನಿನ್ನದೆ ಸುದ್ದಿ ತೆಗೆದು ಅದನ್ನು ಹಾಕಿದ್ದಾರೆ ಅಂತ ಮತ್ತೊಂದು ಸುಳ್ಳು ಹೇಳಿದ. ಹೌದಾ ಸರ್ ಪರವಾಗಿಲ್ಲ ಆ ಸುದ್ದಿಯಲ್ಲಿ ಸ್ವಲ್ಪ ನನ್ನದೆ ಲೀಡ್ ಮಾಡ್ಬೇಕಿತ್ತು ಸರ್ ಅನ್ನಬೇಕೆ. ಬಳಿಯ ಕುರ್ಚಿಯಲ್ಲಿ ಕುಳಿತು ಸರ್ ಇನ್ನು ಎರಡು ಹೆಸರು ಹೆಚ್ಚಿಗೆ ಸೇರಿಸಬೇಕು ದಯವಿಟ್ಟು ಅಂತ ಕುಳಿತ. ಕೇವಲ ಅರ್ದ ಕಪ್ ಚಹಾ ಎಷ್ಟು ಸಮಸ್ಯೆಯನ್ನ ಇಲ್ಲಿ ನನ್ನ ಸ್ನೇಹಿತನಿಗೆ ತಂದೊಡ್ಡಿತ್ತೆಂದರೆ ಬೇರೆಯವರ ಚಹಾ ಕುಡಿದು ಜೀವನದಲ್ಲಿ ಏನೊ ದೊಡ್ಡ ತಪ್ಪು ಮಾಡಿದ್ದೇನೆ ಅನ್ನುವಂಗಾಗಿತ್ತು. ಸಾಮಾನ್ಯವಾಗಿ ಪತ್ರಕರ್ತರಾದವರಿಗೆ ಇಂತಹ ಸಂದರ್ಭಗಳು ಬಹಳಷ್ಟು ಗತಿಸುತ್ತಿರುತ್ತವೆ. ಹೆಸರು ಸೇರಿಸುವುದು ಮತ್ತು ಲಿಡ್ ಮಾಡುವುದು ಏನೋ ಸರಿ. ಯಾಕೆಂದರೆ ಅದೇನು ಪ್ರಮುಖ ಸುದ್ದಿಯಲ್ಲವೆಂದು ಕೈಬಿಟ್ಟಿದ್ದ ಸುದ್ದಿ ಈಗ ಅವನಿಗೆ ಭೂತಪ್ರೇತವಾಗಿ ಒಟ್ಟೊಟ್ಟಿಗೆ ಕಾಡಿತ್ತು. ಆ ಆಸಾಮಿ ಕುರ್ಚಿ ಬಿಟ್ಟು ಹೇಳುತ್ತಿಲ್ಲ. ಇನ್ನು ಸುದ್ದಿ ಮಾಡಿಲ್ಲ ಅಂತ ಹೇ:ಳುವುದೇ ಇಲ್ಲಿ ಸತ್ಯ ಕಹಿ ಅನ್ನಿಸಿದರೂ ಹೇಳಬಹುದೇನೋ ಆದರೆ ಅದು ಹೇಗೆ .ಹೇಳಿದರೂ ಸುದ್ದಿ ಮಾಡಲೇಬೇಕು. ಸುದ್ದಿ ಮಾಡದೆ ವಿಧಿಯಿಲ್ಲ. ಆದರೂ ಆ ಸುದ್ದಿ ಬೆಳಗ್ಗೆ ಪತ್ರಿಕೆಯಲ್ಲಿ ಪ್ರಿಂಟ್ ಆಗುತ್ತೆ ಅಂತ ಬರವಸೆ ಯಾರಿಗಿದೆ. ಅದನ್ನು ಉಪ ಸಂಪಾದಕರು. ಮುಖ್ಯ ಉಪ ಸಂಪಾದಕರು. ನಿರ್ಣಯಿಸಿದ ಮೇಲೆ ತಾನೆ. ಒಂದು ಸಣ್ಣ ಪದಾಧಿಕಾರಿಗಳ ನೇಮಕ ಸುದ್ದಿಗಾಗಿ ಅವರಲ್ಲಿ ವಿನಮ್ರತೆಯಿಂದ ಹೇಳಬೇಕು. ಅದಕ್ಕು ಸ್ವಾಭಿಮಾನ. ನೋಡಿ ಒಂದು ಸುಳ್ಳು ಹೇಗೆ ಮನುಷ್ಯನನ್ನು ಅಧಿರನನ್ನಾಗಿಸುತ್ತೆ. ಹಾಗಾದರೆ ಸುಳ್ಳು ಹೇಳದೆ ಇರಲು ಸಾಧ್ಯವಾ???????
------------------------------------------ ಮೌನಯೋಗಿ