ಕಣ್ಣೀರ ಕಡಲಲಿ ಕೃಷಿಕನ ತವರು




ಕಣ್ಣೀರ ಕಡಲಲಿ ಕೃಷಿಕನ ತವರು


ನೇಗಿಲಯೋಗಿಯ ನೋಡಲ್ಲಿ 
ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ
ಅದರಲಿ ಹಾರಿ ಪ್ರಾಣವ ಬಿಟ್ಟನು

ಹತ್ತಿ, ಕಬ್ಬು ಬೆಳೆಯಲು ಅವನು
ಲಕ್ಷ ಸಾಲವ ಮಾಡಿಹನು
ಫೈರಿಗೆ ಹಚ್ಚಿದ ಬೆಂಕಿಯಲಿ
ಬೆಂದು ಭಸ್ಮವಾಗಿಹನು

ಸಾಲವ ಕೊಟ್ಟರು ಶೂಲವ ಕೊಟ್ಟರು
ಕೃಷಿಕನ ಬಾಳಿಗೆ ಬೆಂಕಿಯನಿಟ್ಟರು
ಕಣ್ಣೀರ ಕಡಲಲಿ ಕೃಷಿಕನ ತವರು


ಭಾಗ್ಯದ ಬೆನ್ನತ್ತಿರುವ ಸರ್ಕಾರಗಳು
ರೈತನ ಜೋಳಿಗೆ ಖಾಲಿಯಿಟ್ಟು 
ಹಂಗಿನ ಅರಮನೆ ಸೃಷ್ಠಿಸುತಿಹರು

ಪರಿಹಾರ ನೆಪದಿ ಭೇಟಿಯನ್ನಿತ್ತರು
ಮೊಸಳೆ ಕಣ್ಣೀರು ಸುರಿಸುತಿಹರು
ಪುಡಿಗಾಸು ನೀಡಿ ಪೆÇೀಸು ಕೊಟ್ಟು
ಪತ್ರಿಕೆಗಳಲಿ ರಾರಾಜಿಸುತಿಹರು

ಅನ್ನವ ಬೆಳೆವ ಅನ್ನದಾತನು
ಹಸಿವು ತಾಳದೆ ಆತ್ಮಹತ್ಯೆ ಹಾದಿ ಹಿಡಿದನು ...
ಸಾಲದ ಋಣವು ಶೂಲವಾಗಿ
ಬಾಳನು ನುಂಗಿತು ಮುಂದೆ ಸಾಗಿ
  - ಮೌನಯೋಗಿ
(ನನ್ನ ಮಾನಸ ಗುರು ಕವಿ ಕುವೆಂಪುರವರ ಕ್ಷಮೆ ಕೋರುತ್ತಾ)   

Comments

Popular posts from this blog

ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ