- Get link
- X
- Other Apps
Popular posts from this blog
ಯುಗಾದಿ ಮತ್ತೆ ಬರಲಿ…
ಯುಗಾದಿ ನಿಮಿತ್ತ ಬರೆದ ನನ್ನ ಕವಿತೆ… ..ಮಹೇಶ ಕಲಾಲ ಯಾದಗಿರಿ ಯುಗಾದಿ ಮತ್ತೆ ಬರಲಿ ಭರವಸೆ ಬೆಳಕು ತರಲಿ ಬೇವು ಬೆಲ್ಲವ ಬೆರಸಿ ಪ್ರೀತಿ ಸ್ನೇಹ ಅರಸಿ ಬರುವ ನವ ಜೋಡಿಗಳ ಬಾಳಲಿ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ ಬರವ ನೀಗಲಿ ಬದುಕ ಸಾಗಲಿ ಜನ ಜಾನುವಾರು ಪ್ರಾಣ ಉಳಿಯಲಿ ಕಾಯಕ ಯೋಗಿ ಕೈಯ ಹಿಡಿಯಲಿ ಅನ್ನದಾತನುಜಂಗೆ ಅಕ್ಷರ ಸಿಗಲಿ ಗನ್ನು ಹಿಡಿವ ಕೈ ಪೆನ್ನು ಹಿಡಿಯಲಿ ಅಕ್ಷರ ಕ್ರಾಂತಿಗೆ ಮುನ್ನುಡಿಯಾಗಲಿ ಅಂತ್ಯಜರ ನೋವ ಕರಗಿಸುವ ಭಾವ ಹುಟ್ಟಿ ಬರಲಿ ಶಿವ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಉದ್ಯೋಗವ ಅರಸಿ ಮಹಾನಗರವ ಸೋಸಿ ಸೋತು ಬರುವ ನೋವ ತರುವ ಎದೆವ ನೋವ ಮರೆವ ಮರೆತಂತೆ ತರುವ ಭಾವ ಉದ್ಯೋಗ ಅರಸಿ ಬರುವ ಯುವಕರಲ್ಲಿ ನವ ಚೈತನ್ಯ ಬರಲಿ ಸರ್ವರಿಗೆ ಉದ್ಯೋಗ ಸಿಗಲಿ ನಿರುದ್ಯೋಗ ನಿವಾರಿಸಲಿ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಅನ್ನದ ಆಹಾಕಾರ ಅಂತ್ಯ ಕಾಣಲಿ ಹೆಣ್ಣಿನ ಶೋಷಣೆಗೆ ಮುಕ್ತಿ ಸಿಗಲಿ ಅಂಧರ ಬಾಳಲಿ ಬೆಳಕು ತರಲಿ ಸುಂದರ ನಾಳೆ ಮತ್ತೆ ಬರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ




Comments