Posts

Image
Image

ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ..........

ಒಂದು ಸುಳ್ಳಿನ ಕಥೆ.......... ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ.......... ಬಾಲ್ಯದ ಮಾಸದ ನೆನಪುಗಳು, ಕಂಡ ಕನಸುಗಳು ಇನ್ನು ಹಸಿಯಾಗಿವೆ ಏನೋ ಎನಿಸುತ್ತಿವೆ. ತೀರಾ ಇತ್ತಿಚಿಗೆ ನಡೆದಿದೆಯೇನೋ ಎಂಬಂತೆ. ಹಸಿ ಸುಳ್ಳಿಗೆ ಹದಿನಾರು ಸಾವಿರ ದಾರಿಯಂತೆ. ನಿಜವೆ ಇರಬಹುದು. ಸುಳ್ಳು ಹೇಳುವುದು ಎಂದರೆ ಸುಲಭವಲ್ಲ ಅದೊಂದು ಕಲೆ. ವಂಶಪಾರಂಪರ್ಯವಾಗಿಯಾಗಲಿ ಅಥವಾ ಜನ್ಮದತ್ತವಾಗಿಯಾಗಲಿ ಬರುವ ಕಲೆಯಲ್ಲ ಅದೊಂದು ಅದ್ಭುತ ಕಲೆ ಎನ್ನಬಹದು. ಯಾಕೆಂದರೆ ಒಂದು ಬಾರಿ ಸುಳ್ಳು ಹೇಳಿದರೆ ಮುಗಿತು. ಅದರಿಂದ ತಪ್ಪಿಸಿಕೊಳ್ಳೋದು ಸಾಧ್ಯನಾ. ಇಲ್ಲ. ಒಂದಕ್ಕೊಂದು ಸುಳ್ಳು ಹೇಳುತ್ತಾ ಹೋಗುತ್ತಾ ಇರಬೇಕು ಅಷ್ಟೆ. ಅದೊಂದು ತರಹ ಮುತ್ತಿನ ಮಾಲೆಗೆ ಮಣಿಗಳನ್ನು ಪೊಣಿಸಿದಂತೆ ಒಂದು ವೇಳೆ ಸೀಮಿತವಾಗಿದ್ದರೆ ಮುತ್ತಿನ ಸರ ಚೆನ್ನಾಗಿರುತ್ತೆ. ಆದರೆ ಅದು ಕೂಡ ವಿಪರೀತವಾಗಿದ್ದರೆ ತನ್ನ ಕಳೆ ಮತ್ತು ಸೊಬಗನ್ನು ಕಳೆದುಕೊಳ್ಳುತ್ತದೆ. ನೀವೆ ಯೋಚಿಸಿ ಸುಳ್ಳನ್ನು ಸುಲಭವಾಗಿ ಹೇಳಲು ಸಾಧ್ಯನಾ. ಹಾಗಂತ ಸುಳ್ಳು ಹೇಳದೆ ಇರುವುದು ಸಾಧ್ಯನಾ. ನನಗಂತು ಸಾಧ್ಯವಿಲ್ಲ ಅನ್ನಿಸುತ್ತೆ. ಸತ್ಯವನ್ನು ತಲೆ ಮೇಲೆ ಹೊಡೆದಂತೆ ಹೇಳಬಹದು ಅಂತ ಹಿರಿಯರು ಹೇಳ್ತಾರೆ. ಬರಿ ಸತ್ಯ ಹೇಳುತ್ತಾ ಜೀವನದಲ್ಲಿ ಸುಳ್ಳು ಹೇಳದೆ ಇರುವುವವರು ಉಂಟಾ. ಬರಿ ಸುಳ್ಳು ಹೇಳುತ್ತಾ ಇರುವುವರು ಉಂಟಾ. ಸತ್ಯ ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖದಂತೆ ಎನ್ನುವುದು ನನ್ನ ಅನಿಸಿಕ...

ಶೋಷಣೆ

±ÉÆÃµÀuÉ ºÉuÉÚ ¤Ã ¨É¼À¢AUÀ¼À ¨Á¯É CgÀ½zÀgÉà ºÀÆ ªÀiÁ¯É GjzÀgÉà eÁé¯É        PÀtÚAZÀ° PÉÆÃ°äAZÀÄ        ºÀwÛ GjzÀgÉà PÁrÎZÀÄÑ        DzÀgÀÆ ¤Ã ¥Á®PÀjUÉ vÀ¯É ±ÀÆ¯É CAvÀgÀAUÀzÀ°è C«µÁÌgÀ §»gÀAUÀzÀ°è §»µÁÌgÀ J¯Éè°èAiÀÄÆ £ÀqÉ¢zÉ ¤£ÀßAiÀÄ ªÁå¥ÁgÀ         ¤Ã¤Ã d£ÀgÀ ¥ÀUÀqÉAiÀÄ fêÁ¼À         GgÀĽ GgÀĽ ¸ÉÃj¢ ¥ÁvÁ¼À         Dr¸ÀĪÁvÀ£À PÉÊAiÀÄ°è ¤Ã£Àß fêÁ¼À ¨sÁªÀ, §AzsÀUÀ½®è §j ªÁå¥ÁgÀ ¥ÀÄrUÁ¹VAvÀ®Æ ¤Ã §®Ä¨sÁgÀ ¤£Àß ¨sÀªÀzÀ zÁj zÀÆgÀ zÀÆgÀ         ±ÉÆÃµÀuÉAiÀÄ ¸ÉÃvÀÄªÉ ¤£ÀßAiÀÄ ¨Á¼ÀÄ         zÉúÀ Gj¹ dUÀPÉ ¨É¼ÀPÀ ¤ÃqÀĪÀªÀ¼ÀÄ         ¤£Àß ªÀÄÄUÀÝvÉAiÉÄà ¤£Àß fêÀPÉ GgÀļÀÄ             ...

ಭೂ ಭಾರ......

ಭೂ ಭಾರ......      ಜಾಜಿ ಮಲ್ಲಿಗೆ ನೀ      ಕೆಂಡ ಸಂಪಿಗೆ ನೀ      ಎನ್ನ ಹೃದಯದ ಮೌನವೀಣೆ                              ಮುಟ್ಟು ತಟ್ಟು ಎಂದು                              ಕಾಲಡಲಿ ಬಿಟ್ಟರು ಅಂದು                              ಸಂದು ಗೊಂದು ಎಂದು                              ಸಂಧಿಲಿ ಬಂಧಿಸಿಹರು ಇಂದು    ಶಾಸ್ತ್ರಗಳ ಆಲಕೆ ಬಳ್ಳಿಯಾದೆ    ಶೋಷಿತರ ಕಾಲಿಗೆ ಮುಳ್ಳಾದೆ    ಕುಲದ ಕುಲುಮೆಯೋಳ್ ಬೆಂದು ...

ತ್ಯಾಗ ಜೀವಿಯ ನೆನಪಲ್ಲಿ....

ತ್ಯಾಗ ಜೀವಿಯ ನೆನಪಲ್ಲಿ.... \ಸ್ನೇಹಿತರಿಗೆ ನಾನು ನನ್ನ ಮುಖಪುಟದಿಂದ ಕಳೆದ ಕೆಲವು ದಿನಗಳಿಂದ ಕಾನಿಸದಿದ್ದುದಕ್ಕೆ ಕಾರಣವಿತ್ತು. ಬಡತನದಲ್ಲಿ ಬೆಂದು ಬಳಲಿ ತನ್ನ ಮೂವರು ಮಕ್ಕಳನ್ನು ಸ್ನಾತಕೋತ್ತರ ಪದವಿಧರನ್ನಾಗಿ ಮಾಡಿದ ನನ್ನ ಪೂಜ್ಯ ತಂದೆ ತ್ಯಾಗ ಜೀವಿಯು ದಿವಂಗತರಾಗಿ ಇಂದಿಗೆ 12 ದಿನಗಳು ಕಳೆದವು. ತನ್ನ ಮಕ್ಕಳ ಸಾಕಿ ಸಲುಹಿ ಬೆಳಸಲೋಸುಗ ವಿವಿಧ 11 ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನೋವು ನಲಿವುಗಳನ್ನುಂಡು ಕಷ್ಟಕೂಟಲೆಗಳನ್ನೆದುರಿಸಿ ತನ್ನ 57ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರ ಬದುಕು ಮತ್ತು ಸಹನೆ, ಮಕ್ಕಳನ್ನು ಸ್ನೇಹಿತರಂತೆ ಬೆಳೆಸಿದ ರೀತಿ ಮಾರ್ಗದರ್ಶಿತ್ವವು ನಮಗೆ ಪ್ರೇರಣೆಯಾಗಿದ್ದಲ್ಲದೆ ಸಮಾಜಕ್ಕೂ ಪ್ರೇರಣೆ ಎಂಬುದು ಸುಳ್ಳಲ್ಲ. ಒಬ್ಬ ತಂದೆ ತನ್ನ ಮಕ್ಕಳನ್ನು ಸಾಕಲು ಜೀವನದಲ್ಲಿ ಅವರು ಅನುಭವಿಸಿದ ಘಟನೆಗಳು ಇಂದಿಗೂ ನಮ್ಮ ಕಣ್ಣಮುಂದೆ ಸುಳಿಯುತ್ತಿದೆ...............ನೋವಿನ ನೆನಪು ಮತ್ತೆ ಮತ್ತೆ ಕಾಡುತ್ತಿದೆ.

ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ

ನನ್ನ ಕೆಲವು ಕವನಗಳಲ್ಲಿ ನನಗೆ ಹೆಚ್ಚಾಗಿ ಮೆಚ್ಚುಗೆಯಾದ ಕವನ ನಿಮಗೂ ಹಿಡಿಸಿದಲ್ಲಿ ಒಂದು ಸಣ್ಣ ಲೈಕ್ ಮಾಡಿ............ ............ಹಕ್ಕಿ ಹಾರುತಿದೆ ನೋಡಿರೋ............. -- ಹಕ್ಕಿ ಹಾರುತಿದೆ ನೋಡಿರೋ ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ ಪುಂಡ, ಪೋಕರಿಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ                                 (ಪಲ್ಲವಿ)                    ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ                    ಉಳುವಾಯೋಗಿಗೆ ಉರುಳು ಕೊಟ್ಟಿ                    ದನಕರುಗಳ ನೆತ್ತಿಮ್ಯಾಲೆ                    ಹಕ್ಕಿ ಹಾರುತಿದೆ ನೋಡಿರೋ ಕಪ್ಪುಹಣದಲ್ಲಿ ಮಂದ...

ಬಾಂಧವ್ಯದ ಬೆಸುಗೆ

ಬಾಂಧವ್ಯದ ಬೆಸುಗೆ ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ ಯಾರೋ ಮನೆಯಂಗಳದಿ ಅರಳಿದ ಹೂ ಕರುಣೆಯ ಹೊಂಬೆಳಕು ಎಮ್ಮ ಮನೆಯಂಗಳದಿ ದೀಪವ ಹಚ್ಚಿ ಪಸರಿಸಿದಿ ನೀ ನಗೆಯ ಬೆಳಕು ದೀಪದಿಂದ ದೀಪವೋ ಬಾಂಧವ್ಯದ ಬೆಸುಗೆಯೋ ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ                               --------- ಮೌನಯೋಗಿ

ಶಬ್ದಗಳ ಗೊಂದಲ, ಓದುಗ ವಿಲವಿಲ

ಪತ್ರಿಕಾರಂಗ ಈಗ ಕಳೆಕಳೆದುಕೊಳ್ಳುತ್ತಾ ಉದ್ಯಮವಾಗಿ ಪತ್ರಿಕೋಧ್ಯಮವಾದಂತೆಲ್ಲ ಅದರಲ್ಲಿ ಭಾಷೆಯ ಬಳಕೆ ಕೂಡ ಭಿನ್ನ ವಿಭಿನ್ನವಾಗುತ್ತಿದೆ. ಸಾಹಿತ್ಯೀಕ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಓದುಗನ ಅಭಿರುಚಿಗಿಂತ ತಮ್ಮ ತಮ್ಮ ಶೈಲಿಯಲ್ಲಿ ಭಾಷೆಯ ಪದ ಬಳಕೆ ಈಗ ಹೆಚ್ಚಾಗುತ್ತಿದೆ ಆದ್ದರಿಂದ ಈ ಭಾಷೆಯ ಶಬ್ದಗಳ ಗೊಂದಲದಿಂದ ಓದುಗ ವಿಲವಿಲ ಒದ್ದಾಡುತ್ತಿದ್ದಾನೆ ಎನ್ನುವದರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಪತ್ರಿಕೆ ಇಂದು ತನ್ನದೇ ಆದ ಭಾಷೆ ಶೈಲಿಯ ಪದ ಬಳಕೆಯನ್ನ ಹೊಂದಿದೆ. ಗಮನಿಸಬೇಕಾದುದು ಇಲ್ಲಿ ಶೈಲಿ ಯಾರದಾದರೇನು ಪತ್ರಿಕೆಗಳಿಗೆ ಓದುಗ ಮುಖ್ಯವಲ್ಲವೇ ಆದರೆ ಇಲ್ಲಿ ಶೈಲಿಯ ಪದಗಳ ವಿಭಿನ್ನತೆಯಿಂದ ಆ ಶಬ್ದಗಳ ಗೊಂದಲ ಓದುಗನನ್ನು ಕಾಡುತ್ತಿರುವುದಂತು ಸತ್ಯ. ನಮ್ಮ ಸಾಹಿತೀಕ ಪರಿಭಾಷೆಯಲ್ಲಿ ನಾವು ಒಂದೇ ಶಬ್ದಕ್ಕೆ ಹಲವು ಅರ್ಥಗಳನ್ನ ಬಳಸುವುದನ್ನು ನಾವು ಕಾಣುತ್ತೇವೆ. ಯಾಕೆಂದತೆ ಆ ಕೃತಿ ರಚಿಸಿದ ಸಾಹಿತಿ ಅವರು ಜೀವಿಸುತ್ತಿರುವಲ್ಲಿನ ಪರಿಸರದಲ್ಲಿ ಬಳಸುವ ಶಬ್ದಗಳ ಬಳಕೆಯಿಂದ ಸಾಹಿತ್ಯ ರಚಿಸುವುದು ಸೂಕ್ತವೆನ್ನುವುದು ನಮ್ಮ ಅನಿಸಿಕೆ. ಆದರೆ ಒಂದು ಪತ್ರಿಕೆ ಯಾವೊಂದು ಪರಿಸರ ಅಥವಾ ಪ್ರದೇಶಕ್ಕೆ ಸಿಮಿತವಾಗಿರಲ್ಲ ಅಖಂಡತೆಯನ್ನ ಪತ್ರಿಪಾಧಿಸುವ ಒಂದು ಸಂಚಾರ ಮಾಧ್ಯಮ ಇಲ್ಲಿ ಪತ್ರಿಕೆಗೆ ಒಂದು ಭಾಷೆ ಇರುತ್ತದೇಯೋ ಹೊರತು ಪ್ರದೇಶಕ್ಕೊಂದು ಭಾಷೆ ಇರಲ್ಲ. ಒಂದಂತು ಸತ್ಯ ಆ ಪತ್ರಿಕೆಗಳಲ್ಲಿ ಪ್ರಚುರಪಡಿಸುವ ಲೇಖನ...

ಶಾಲು...............

ಶಾಲು............... ಶಾಲು ಸನ್ಮಾನ ಬೇಡವೆನ್ನದರಿ ಓ ಸನ್ಮಾನಿತರೇ ಬದುಕು ಬೇಡವಾದಾಗ ಅಥವಾ ಸಾಲ ಹೆಚ್ಚಾದಾಗ ಆಧಾರಕ್ಕಿರಲಿ ಈ ಶಾಲು................... -------------------------------------------------ಮೌನಯೋಗಿ.............