Posts

Showing posts from March, 2017

ಯುಗಾದಿ ಮತ್ತೆ ಬರಲಿ…

ಯುಗಾದಿ ನಿಮಿತ್ತ ಬರೆದ ನನ್ನ ಕವಿತೆ… ..ಮಹೇಶ ಕಲಾಲ ಯಾದಗಿರಿ ಯುಗಾದಿ   ಮತ್ತೆ   ಬರಲಿ ಭರವಸೆ   ಬೆಳಕು   ತರಲಿ ಬೇವು ಬೆಲ್ಲವ ಬೆರಸಿ ಪ್ರೀತಿ ಸ್ನೇಹ ಅರಸಿ ಬರುವ ನವ ಜೋಡಿಗಳ ಬಾಳಲಿ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ ಬರವ ನೀಗಲಿ ಬದುಕ ಸಾಗಲಿ ಜನ ಜಾನುವಾರು ಪ್ರಾಣ ಉಳಿಯಲಿ ಕಾಯಕ ಯೋಗಿ ಕೈಯ ಹಿಡಿಯಲಿ ಅನ್ನದಾತನುಜಂಗೆ ಅಕ್ಷರ ಸಿಗಲಿ ಗನ್ನು ಹಿಡಿವ ಕೈ ಪೆನ್ನು ಹಿಡಿಯಲಿ ಅಕ್ಷರ ಕ್ರಾಂತಿಗೆ ಮುನ್ನುಡಿಯಾಗಲಿ ಅಂತ್ಯಜರ ನೋವ ಕರಗಿಸುವ ಭಾವ ಹುಟ್ಟಿ ಬರಲಿ ಶಿವ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಉದ್ಯೋಗವ ಅರಸಿ ಮಹಾನಗರವ ಸೋಸಿ ಸೋತು ಬರುವ ನೋವ ತರುವ ಎದೆವ ನೋವ ಮರೆವ ಮರೆತಂತೆ ತರುವ ಭಾವ ಉದ್ಯೋಗ ಅರಸಿ ಬರುವ ಯುವಕರಲ್ಲಿ ನವ ಚೈತನ್ಯ ಬರಲಿ ಸರ್ವರಿಗೆ ಉದ್ಯೋಗ ಸಿಗಲಿ ನಿರುದ್ಯೋಗ ನಿವಾರಿಸಲಿ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಅನ್ನದ ಆಹಾಕಾರ ಅಂತ್ಯ ಕಾಣಲಿ ಹೆಣ್ಣಿನ   ಶೋಷಣೆಗೆ ಮುಕ್ತಿ ಸಿಗಲಿ ಅಂಧರ ಬಾಳಲಿ ಬೆಳಕು ತರಲಿ ಸುಂದರ ನಾಳೆ ಮತ್ತೆ ಬರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ
Image
Image

ಸಂಕಲ್ಪದ ಸಂಕೋಲೆ

ನನ್ನ ಮೊದಲ ಕಥೆ ಸಂಕಲ್ಪದ ಸಂಕೋಲೆ - ಮಹೇಶ ಕಲಾಲ ಯಾದಗಿರಿ ಹಳದಿ ದೀಪ ಮಿನುಗುತ್ತಿದ್ದಂತೆ ರಘು ಕಿಟಾರನೆ ಕಿರುಚಿದ. ಹೊರ ಬಾಗಿಲ ಬಳಿ ಕುಳಿತಿದ್ದ ರಂಗಮ್ಮ ಮಗನಿಗೆ ಏನಾಯ್ತು ಎಂದು ಓಡೋಡಿ ಮನೆ ಯ ಒಳಗೆ ಬಂದಳು. ಮಗ ಮೂಲೆಯಲ್ಲಿ ಒಬ್ಬನೆ ಏನೇನೋ ಎಣಿಸುತ್ತಿರುವಂತೆ ತಾನೋಬ್ಬನೆ ತನ್ನ ಬೆರಳನ್ನು ಹಿಂದೆ ಮುಂದೆ ಮಾಡುತ್ತಿರುವದನ್ನು ನೋಡಿ ರಂಗಮ್ಮನ ಮಾತೃ ಹೃದಯ ಕಿವಿಚಿದಂತಾಗಿ ಹಾಗೆ ನೆಲಕ್ಕುರುಳುವಂತೆ ಕುಳಿತುಬಿಟ್ಟಳು. ಕೆಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ದಿನಾ ಸಂಜೆ ಕರೆಂಟ್ ಬರುವದು ರಘು ಹೀಗೆ ಚೀರುವುದು ರಂಗಮ್ಮನಿಗೆ ರೂಢಿಯಾಗಿದ್ದರು. ದಿನಾ ಹೊಸದರಂತೆ ಭಯಪಡುತ್ತಿದ್ದಳು. ಅವಳ ಭಯಕ್ಕಿಲ್ಲದ ಅಂತ್ಯಕ್ಕೆ ತತ್ತರಿಸಿದ ಆ ಜೀವ ಶೀವನೆ ಯಾಕಾದರೂ ನನ್ನ ಈ ರೀತಿ ಬದುಕಿಸಿದ್ದಿಯಾ ಎಂದು ಶೀವನಲ್ಲಿ ಕರುಣಾಭಾವದಿಂದ ಕೈಮುಗಿದು ಕುಳಿತಿದ್ದಳು. ರಘು ರಘು ಬಾ ಮಗ ಎಲ್ಲಿದ್ದಿಯಾ ನಿನ್ನೆ ನಿಮ್ಮಪ್ಪ ಕೊಟ್ಟ ದುಡ್ನ ಕಳುವು ಮಾಡಿದೇನಾ ಪಲ್ಯಾ ತರಲಿಕ್ಕೆ ಬೇಕೋ ಅದು ಎಂದು ಒಂದೇ ಉಸಿರಿನಲ್ಲಿ ರಂಗಮ್ಮ ತನ್ನ ಮಗನಿಗೆ ಕರೆಯುತ್ತಿದ್ದಳು. ಇಗಾ ಅದು ಎಲ್ಯಾದ ಅಂತ ಹೇಳ ಇಲ್ಲಂದ್ರ ನೀನಗ ಸಾಲಿಗೆ ಕಳಸಲಿಕ್ಕಾ ಡಬ್ಬಿ ತುಂಬಂಗಿಲ್ಲ ನೋಡ. ಉಪಾಸ ಇರಬೇಕಾಗತದ. ಎಂದು ಒಂದೇ ಸಮನೆ ತಾಯಿ ಮನೆಯ ಒಳಗಿಂದ ಕರೆಯುತ್ತಿದ್ದ್ರು. ರಘು ತಾ ಕುಳಿತಲ್ಲಿಂದ ಮೇಲೆಳಲೇ ಇಲ್ಲ. ಅವ ತನ್ನ ಆಟದಲ್ಲೆ ಮಗ್ನನಾಗಿದ್ದ. ಹೊರಗಡೆಯಿಂದ ಬಂದ ರಂಗಪ್ಪ ಏ ರಘ್ಯಾ ನಿಮ್ಮವ್...